Sunday, October 10, 2010

ಆಸ್ಪತ್ರೆಗೆ ನಿಮ್ಮ ಸಂಭ್ಹಂದಿಕರು ಸೇರಿದ್ದಾರಾ? ನೋಡಲು ಹೋಗಿದ್ದೀರಾ?

ನಮ್ಮ ಮನೆ ಪುತ್ತೂರು ನಗರದ ಮದ್ಯ ಭಾಗದ ಗದ್ದೆ ಬಯಲಿನ ಕರೆ ಯ ಗುಡ್ದದಲ್ಲಿದೆ. ಬಸ್ಸು ನಿಲ್ದಾಣ ಮುರು ನಿಮಿಷದ ದಾರಿ.

ಕಳೆದ ೪೦ ..೫೦ ... ಮರುಷ ದಿಂದ ನಾನು ನಮ್ಮ ನೆಂಟರು ಆಸ್ಪತ್ರೆ ವಾಸಿ ಗಳಾದಾಗ ಅವರಿಗೆ ನನ್ನ ಅಪ್ಪ ಅಮ್ಮನ ಹತ್ತರೆ ಕೇಳದೆ " ಅಯ್ಯೋ... ನಿಂಗೊ ಹೊಟೆಲ್ ಊಟ ಮಾಡಡಿ ಯನ್ನ ಮನೆಂದ ಊಟ ತಪ್ಪಲಕ್ಕು ಯೆಂದು ಬಂದು ಬಿಡುತ್ತಿದ್ದರು. ನನಗೆ ಒಳಗೊಳಗೇ ಬಾರಿ ಖುಷಿ. ಅವರ ಊಟದ ಸಾಗಾಟ ನೆಪ ದಲ್ಲಿ ನನ್ಗೆ ಪೇಟೆ ಗೆ ಹೋಗಬಹುದು, ಮಾಲಿಂಗೇಶ್ವರ ದೇವಳಕ್ಕೆ ಹೋಗಿ, ಅರುಣಾ ಸಿನೆಮಾ ದ ವಾಲ್ ಪೋಸ್ಟು ನೋಡಿ ನನ್ನ ಪುಟ್ಟಣ್ಣ ನ ಅಪ್ಪಣೆಯಂತೆ ನೆಕ್ಸ್ಟು ಚೇಂಜು ಯಾವುದು ಹಾಗೂ ಈಗಿನ ಸಿನೆಮಾ ಕಡೇದಿನ ಯಾವಾಗ ಯೆಂದು ನೋಡ ಬಹುದಲ್ಲಾ.

ಹಾಗೆ ಎಷ್ಟೊ ಬಾರಿ ನನಗೆ ಅವಕಾಶ ಸಿಕ್ಕಿತ್ತು.

ಆಗ ನನಗೆ ಕಂಡ ಕೇಳಿದ ಸಾಮನ್ಯ ಮಾತುಗಳು.

ರೋಗಿ ಗುಣ ವಾಗುತ್ತಿದ್ದರೆ : ಡಾಕ್ಟರಿಗೇ ಅಚ್ಚರಿ ಯಾಗಿತ್ತು.. ಇಷ್ಟು ಬೇಗ ಗುಣ ಆದ್ದು ನೋಡಿ.
ಗುಣವಾಗದೆ ಜೋರಾದರೆ : ಡಾಕ್ಟರಿಗೆ ಗೊತ್ತಾಗಿಲ್ಲಾ.

No comments:

Post a Comment