Friday, October 15, 2010

ನನ್ನ ಅಪ್ಪ ಹೇಳುತ್ತಿದ್ದ ಕಗ್ಗ.....

ಮುಂದೇನೊ, ಮತ್ತೇನೊ ಇಂದಿಗಾ ಮಾತೇಕೆ?
ಸಂದರ್ಭ ಬರಲಿ, ಬಂದಾಗಳಾ ಚಿಂತೆ
ಹೊಂದಿಸುವವನಾರೊ, ನಿನ್ನಾಳಲ್ಲ... ಬೇರಿಹನು
ಇಂದಿಗಿಂದಿನ ಬದುಕು.... ಮಂಕುತಿಮ್ಮಾ.....


ಹಾಗಂತ, ಅಲ್ಪ ಆದಾಯದ ಕನ್ನಡ ಮೇಷ್ತ್ರು ನನ್ನಪ್ಪ. ತಿಂಗಳ ಕೊನೆಗೆ ಸಂಬಳ ದ ಹಣ ಮುಗಿಯುತ್ತಿದ್ದರೂ " ಆಟಕ್ಕೆ " ಹೋಗಲು ಇದ್ದ ಕೊನೆಯ ನೋಟನ್ನ ಖರ್ಚು ಮಾಡಬೇಡಿ ಎಂದು ಅಮ್ಮ ಗೋಗರೆಯುವಾಗ ಹೇಳಿದ್ದು. ಹೌದು. ಅಪ್ಪನಿಗೆ ಕಷ್ಟಕ್ಕೆ ಬೇರೆಯವರಿದ್ದರು.

ಇಂದಿನ ಸಾಪ್ಟುವೇರು ಕುಳಗಳಿಗಳಿಗೆ ಮಾಸ್ಟ್ರುಗಳಿಗೂ ಇದು ಉಲ್ಟವಾಗಿದೆಯೋ ಎಂದು ನನಗನಿಸಿದರೆ ತಪ್ಪೇ? ಬೇರೆಯವರಿಹರು ಇಂದೇ "ಬದುಕನನುಭವಿಸುವಾ" ಎನ್ನುವರೇ ಹೆಚ್ಹಿನವರು... ಯಾರೂ ಹೆಗಲು ಮುಟ್ಟದಿರಿ.....?

ಕಾಲಾಯ.. ತಸ್ಮೆಯ್ಯೀ ನಮಃ........

No comments:

Post a Comment