Thursday, November 25, 2010

ನೋಡಿ ಶ್ರೀ ಮರಿಯಪ್ಪ ಶಾಸ್ತ್ರಿಗಳ ಸಂಗ್ರಹ.ಹವ್ಯಕ ದಲ್ಲಿ.

ದಿ.ಚ.ಮರಿಯಪ್ಪ ಶಾಸ್ತ್ರಿಗಳು. ನಿವ್ರತ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರು. ನನಗೆ ;’ಬೊಂಬೋಚ್ಹ್ಚಿ.’ ತಮ್ಮ ಚಿಕ್ಕ ಪ್ರಾಯದಲ್ಲಿ ಅನಾರೋಗ್ಯ ನಿಮಿತ್ತ ತೆಂಗಿನ ಮರ ದಿಂದ ಬೊಂಡ ತೆಗೆಸಿ ಕುಡಿಯುವಾಗ ತನ್ನ ಅಣ್ಣನ ಮಕ್ಕಳಿಗೂ ತೆಗೆಸಿ ಕೊಡುತ್ತಿದ್ದರಂತೆ. ಈ ಮಕ್ಕಳ ಬಾಲ ಬಾಷೆ ಬೊಂಡಅಪ್ಪಚ್ಚಿ ... ಬೊಂಬಪ್ಪಚ್ಚಿ ಆಯಿತು.

ಇವರು ನಾನು ಕಂಡ ಮಕ್ಕಳ ಜೀವಾನುನುಭವದಲ್ಲಿ ನೋಡಿಯೇ ತಿಳಕೊಂಡ ಶ್ರೇಷ್ಟ ಮಕ್ಕಳ ಮನಃಶ್ಯಾಸ್ತ್ರಜ್ನ.
ನಾನು ’ ವಿವೇಕಾನಂದ ಶಾಲೆಯಾ ಸಂಚಾಲಕ ನಾಗಿದ್ದಾಗ ನನಗೆ ನೀಡಿದ್ದ ಪುಸ್ತಕದ ಪ್ರತಿಇದು.

ದಿ. ಚ. ಮರಿಯಪ್ಪ ಶಾಸ್ತ್ರಿಗಳು, ನನ್ನ ಬೊಂಬಪ್ಪಚ್ಚಿ. ಮಣಿಲಾ ದ " ನವ ಮಣಿಲ: ಮನೆ, ಹವ್ಯಕ ಜಾನಪದ ಶಿಶು ಗೀತೆ ಸಂಗ್ರಾಹಕರು

Wednesday, November 24, 2010


ಇವರು ಯಾರು ಬಲ್ಲಿರ‍ೇನು?
ಹವ್ಯಕ ಸಮಾಜದಲ್ಲಿ ೧೬ ,೧೭ನೇ ಶತಮಾನದಲ್ಲಿ ಮಡೆಕೇರಿ ಅರಸರಿಂದ ಪುರಸ್ಕ್ರತರಾದ ಮೂಡಂಬೈಲು ಶಾಸ್ತ್ರಿ ಮನೆತನದವರು.
’ಮಣಿಲಾ ಶಾಸ್ತ್ರಿ ಸಹೋದರರು.
ನನಗೆ ತಿಳಿದಂತೆ ಆ ಒಂದು ಕಾಲದಲ್ಲಿ ಸುಮಾರಾಗಿ 1945 ರಲ್ಲಿ ಮನೆ ಯಜಮಾನ ಅಕಾಲ ವಿಧಿವಶರಾದಾಗ ಈ ಎಂಟೂ ಜನ ಸಹೋದರು ಸುಮಾರು ಹದಿನೈದು ವರ್ಷಗಳ ಕಾಲ ತಮ್ಮ ಕೊನೆಯ ತಮ್ಮನ ಮದುವೆ ಆಗುವವರೆಗೂ ಸಮಷ್ಟಿ ಕುಟುಂಬ ದ ಜೀವನ ವನ್ನು ಸಮಾಜಕ್ಕೆ ಆದರ್ಶವಾಗಿ ನಡೆಸಿದರು. ಜೆಲ್ಲೆಗೆ ಪ್ರಸಿದ್ದವಾದ " ಪರಿಯಾಲ್ತಡ್ಕ ಹೈಯರ್ ಪ್ರೈಮರಿ" ಶಾಲೆ ಯಲ್ಲಿ ಸಾಂಸ್ಕ್ರತಿಕ ವೈಭವದ ವಾರ್ಷಿಕ ಜಾತ್ರೆಯನ್ನೆ ನಡೆಸಿ ವಿದ್ಯಾಸಂಸ್ಥೆಗಳ ಸ್ಥಾಪನೆಯ ಕನಸು ಕಂಡ ಧೀಮಂತರಿವರು.
ಇಂದಿನ ವಿವೇಕಾನಂದ ಎಜುಕೇಶನ್ ಸೊಸೈಟಿ ನಡೆಸುತ್ತಿರುವ :ಪುಣಚಾ ಶ್ರೀದೇವಿ ಹೈಸ್ಕೂಲ್ ನ ಸ್ಥಾಪನೆಗೆ ಮೂಲ ಪ್ರೇರಕರು.
ಇವರ ಪರಿಚಯ ಮಾಡಿಸಲು ನಾನು ತುಂಬಾ ಹೆಮ್ಮೆ ಪಡುತ್ತೇನೆ.
ಹವ್ಯಕ ಸಮಾಜದಲ್ಲಿ ಇಂದೂ ಇವರ ಮುಂದಿನ ತಲೆಮಾರು ತನಗೆ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಗೌರವಾದರಗಳನ್ನು ಉಳಿಸಿ ಕೊಂಡಿದ್ದು ಉತ್ತಮ ಸ್ಥಾನಮಾನ ಹೊಂದಿದ್ದಾರೆ.
ಇವರ ವಿಶೇಷತೆಗಳನ್ನ ನೋಡಿರಿ.
ಈ ಎಂಟೂ ಸಹೋದರರಿಗೆ ಇಪ್ಪತ್ತಮೂರು ಜನ ಗಂಡು ಮಕ್ಕಳು ಹಾಗೂ ಇಪ್ಪತ್ತಮೂರು ಜನ ಹೆಣ್ಣು ಮಕ್ಕಳು.
ಎಲ್ಲರಿಗೂ ಮದುವೆ ಆಗಿದೆ. ತಕ್ಕ ಮಟ್ಟಿಗೆ ಚೆನ್ನಾಗಿದ್ದಾರೆ. .... ಮುಂದುವರಿಯುವುದು.

Thursday, November 4, 2010

ದೇವರ ಮುಂದೆ ದೀಪ ಹಚ್ಚುವಾಗ ನನಗನಿಸಿತು ಒಮ್ಮೆ ಹೀಗೆ.... ನಿಮಗೆ....

ದೇವರ ಎದುರು ದೀಪ ಹಚ್ಚಿಟ್ಟಿರುವುದು,
ಅವರಿವರ ತಳ್ಳಿ ಎದುರಿನ ಎರಡು ತಲೆ ಮದ್ಯೆ ಮುಖ ತೂರಿಸಿ...
ಎಕ್ಕಳಿಸಿ...
ನಿಮಗೆ ದೇವರನ್ನು ನೋಡುವ ನಿಮ್ಮ ಭ್ರಮೆಗಲ್ಲದಿರಬಹುದು....
ಕತ್ತಲಲ್ಲೂ ನಮ್ಮ ಮುಖದಲ್ಲಿರುವ ದಿನದ ತಪ್ಪಿನ ಭಾವ ದೇವರಿಗೇ... ಕಾಣಲೆಂದು.. ಇರಬಹುದು...
ಅದಕ್ಕೆಂದೇ...... ದೃಷ್ಟಿ ಇಡದೇ ಭಯಪಡುತ್ತಾ ಕಣ್ಣು ಮುಚ್ಚಿ ತಲೆ ಬಾಗಿ ನಮಸ್ಕರಿಸುವುದೇ...?

ದೀಪಾವಳಿ ದಿನ ದೀಪ ಹಚ್ಚುವುದೆಲ್ಲಿ.?

ನೀವು ನನ್ನೆದುರು ಬಂದು ನಿಂದರೆ, ಒಂದು ದೀಪ ಹಚ್ಚುವೆ...
ಜಗವೆಲ್ಲ ಬೆಳಗಲಿ ಎಂದಲ್ಲ....?
ನಿಮ್ಮ ನನ್ನ ಮುಖದ ದುಗುಡ ದುಮ್ಮಾನ ಸಿಟ್ಟು, ಸೆಡವು...
ಪ್ರೀತಿ ವಾತ್ಸಲ್ಯ ಕಾಣಲೆಂದು.....











(ನನಗೆ ನನ್ನನ್ನೂ ಕನ್ನಡ ಶಾಲೆ ಯ ಜತೆ ಬೆಳೆಸಿದ ನನ್ನ ಹಿರಿಯ ಸ್ನೇಹಿತರಂತಿರುವ ಗುರು ಸಮಾನರಾದ ಶ್ರೀ ರಘುನಾಥ ರಾವ್ ಅವರು ಶ್ರೀ ಶಿವರುದ್ರಪ್ಪ ನವರ ಕವನ ಆಧಾರ ದಲ್ಲಿ ಕಳುಹಿಸಿದ ದೀಪ ಹಚ್ಚುವ ದಿನಕ್ಕೆ ಕಳಿಸಿದ ಶುಭಾಶಯಕ್ಕೆ ನನ್ನ ಮನದ ಭಾವ ಇದು.)

Friday, October 15, 2010

ನನ್ನ ಅಪ್ಪ ಹೇಳುತ್ತಿದ್ದ ಕಗ್ಗ.....

ಮುಂದೇನೊ, ಮತ್ತೇನೊ ಇಂದಿಗಾ ಮಾತೇಕೆ?
ಸಂದರ್ಭ ಬರಲಿ, ಬಂದಾಗಳಾ ಚಿಂತೆ
ಹೊಂದಿಸುವವನಾರೊ, ನಿನ್ನಾಳಲ್ಲ... ಬೇರಿಹನು
ಇಂದಿಗಿಂದಿನ ಬದುಕು.... ಮಂಕುತಿಮ್ಮಾ.....


ಹಾಗಂತ, ಅಲ್ಪ ಆದಾಯದ ಕನ್ನಡ ಮೇಷ್ತ್ರು ನನ್ನಪ್ಪ. ತಿಂಗಳ ಕೊನೆಗೆ ಸಂಬಳ ದ ಹಣ ಮುಗಿಯುತ್ತಿದ್ದರೂ " ಆಟಕ್ಕೆ " ಹೋಗಲು ಇದ್ದ ಕೊನೆಯ ನೋಟನ್ನ ಖರ್ಚು ಮಾಡಬೇಡಿ ಎಂದು ಅಮ್ಮ ಗೋಗರೆಯುವಾಗ ಹೇಳಿದ್ದು. ಹೌದು. ಅಪ್ಪನಿಗೆ ಕಷ್ಟಕ್ಕೆ ಬೇರೆಯವರಿದ್ದರು.

ಇಂದಿನ ಸಾಪ್ಟುವೇರು ಕುಳಗಳಿಗಳಿಗೆ ಮಾಸ್ಟ್ರುಗಳಿಗೂ ಇದು ಉಲ್ಟವಾಗಿದೆಯೋ ಎಂದು ನನಗನಿಸಿದರೆ ತಪ್ಪೇ? ಬೇರೆಯವರಿಹರು ಇಂದೇ "ಬದುಕನನುಭವಿಸುವಾ" ಎನ್ನುವರೇ ಹೆಚ್ಹಿನವರು... ಯಾರೂ ಹೆಗಲು ಮುಟ್ಟದಿರಿ.....?

ಕಾಲಾಯ.. ತಸ್ಮೆಯ್ಯೀ ನಮಃ........

Sunday, October 10, 2010

ಆಸ್ಪತ್ರೆಗೆ ನಿಮ್ಮ ಸಂಭ್ಹಂದಿಕರು ಸೇರಿದ್ದಾರಾ? ನೋಡಲು ಹೋಗಿದ್ದೀರಾ?

ನಮ್ಮ ಮನೆ ಪುತ್ತೂರು ನಗರದ ಮದ್ಯ ಭಾಗದ ಗದ್ದೆ ಬಯಲಿನ ಕರೆ ಯ ಗುಡ್ದದಲ್ಲಿದೆ. ಬಸ್ಸು ನಿಲ್ದಾಣ ಮುರು ನಿಮಿಷದ ದಾರಿ.

ಕಳೆದ ೪೦ ..೫೦ ... ಮರುಷ ದಿಂದ ನಾನು ನಮ್ಮ ನೆಂಟರು ಆಸ್ಪತ್ರೆ ವಾಸಿ ಗಳಾದಾಗ ಅವರಿಗೆ ನನ್ನ ಅಪ್ಪ ಅಮ್ಮನ ಹತ್ತರೆ ಕೇಳದೆ " ಅಯ್ಯೋ... ನಿಂಗೊ ಹೊಟೆಲ್ ಊಟ ಮಾಡಡಿ ಯನ್ನ ಮನೆಂದ ಊಟ ತಪ್ಪಲಕ್ಕು ಯೆಂದು ಬಂದು ಬಿಡುತ್ತಿದ್ದರು. ನನಗೆ ಒಳಗೊಳಗೇ ಬಾರಿ ಖುಷಿ. ಅವರ ಊಟದ ಸಾಗಾಟ ನೆಪ ದಲ್ಲಿ ನನ್ಗೆ ಪೇಟೆ ಗೆ ಹೋಗಬಹುದು, ಮಾಲಿಂಗೇಶ್ವರ ದೇವಳಕ್ಕೆ ಹೋಗಿ, ಅರುಣಾ ಸಿನೆಮಾ ದ ವಾಲ್ ಪೋಸ್ಟು ನೋಡಿ ನನ್ನ ಪುಟ್ಟಣ್ಣ ನ ಅಪ್ಪಣೆಯಂತೆ ನೆಕ್ಸ್ಟು ಚೇಂಜು ಯಾವುದು ಹಾಗೂ ಈಗಿನ ಸಿನೆಮಾ ಕಡೇದಿನ ಯಾವಾಗ ಯೆಂದು ನೋಡ ಬಹುದಲ್ಲಾ.

ಹಾಗೆ ಎಷ್ಟೊ ಬಾರಿ ನನಗೆ ಅವಕಾಶ ಸಿಕ್ಕಿತ್ತು.

ಆಗ ನನಗೆ ಕಂಡ ಕೇಳಿದ ಸಾಮನ್ಯ ಮಾತುಗಳು.

ರೋಗಿ ಗುಣ ವಾಗುತ್ತಿದ್ದರೆ : ಡಾಕ್ಟರಿಗೇ ಅಚ್ಚರಿ ಯಾಗಿತ್ತು.. ಇಷ್ಟು ಬೇಗ ಗುಣ ಆದ್ದು ನೋಡಿ.
ಗುಣವಾಗದೆ ಜೋರಾದರೆ : ಡಾಕ್ಟರಿಗೆ ಗೊತ್ತಾಗಿಲ್ಲಾ.

ನನಗೆ ಹೀಗನಿಸಿದೆ ನಿಮಗೆ?

ನನಗೆ ಛೀ ಕಾಡು ಪ್ರಾಣಿ ಆತ... ಎಂದಾಗ ಅಂದವರ ಮೇಲೆ ನ್ಯಾಶನಲ್ ಜಿಯೋಗ್ರಫಿ ಚ್ಯಾನಲ್ ನೊಡಿಲ್ಲ ಅನಿಸುತ್ತದೆ.

Wednesday, September 29, 2010





ಪುತ್ತೂರು ಪಾಂಗಾಲಾಯಿ ಶ್ರೀ ಮುಂಡ್ಯತ್ತಾಯ ದೈವದ ಪ್ರಾರ್ಥನೆ.



ಸ್ವಾಮೀ ರಾಜನ್ ದೈವನೇ ಪರಿವಾರ ದೈವಲೇ, ನಾಗ ಸುಬ್ರಾಯ ದೇವರೇ , ದಿ. ೧೧ನೇ ರವಿವಾರ ೨೦೧೦.

ಕಾಲಾದಿ ಪೋಂಡು ವರ್ಷಾದಿ ಬತ್ತಂಡ್. ವರ್ಷಾದಿ ಪೋಂಡು ಕಾಲಾದಿ ಬತ್ತಂಡ್. ಈ ನಭೊ ಮಂಡಲಡು ಸೂರ್ಯದೇವೆರು ಉದಿತ್ತ್ ದ್ ಬತ್ತ್ ದೇರು. ಇನಿತ್ತದಿನ ಒಂಜಿ ಪುಣ್ಯಕಾಲಯೆಂದೇ ತೆರಿಯೊಂದಾ.. ಈ ಅಮೂರ್ತಗಳಿಗೆಡ್ ಪುತ್ತೂರುದ ಯೆಳ್ನಾಡ್ ಸೀಮೆದ ಶ್ರೀ ಮಹಾಲಿಂಗೇಶ್ವರ ದೇವೆರು ಅಂಚನೇ ನಮ್ಮ ಕುಟುಂಬದ ದೈವ ದೇವೆರ್ನ್ ದುಂಬು ದೀವೊಂದು, ಬಲ್ನಾಡು ಉಳ್ಳಾಲ್ತಿನ್ ಸ್ಮರಣೆ ಮಾಲ್ತೋಂದು ಜಾಗೆಡ್ ಇತ್ತಿನಂಚಿತ್ತಿನ ನಾಗ ಸುಬ್ರಾಯ ದೇವೆರು, ರಕ್ತೇಶ್ವರಿ, ವರಾಹಮೊರ್ತಿ ಪಂಜುರ್ಲಿ, ಅಂಚನೇ ಅಪ್ಪೆ ಕಲ್ಲುರ್ಟಿ, ಪರಿವಾರ ಪೊಟ್ಟನ್ನ್ , ಬಂಟೆ ಗುಳಿಗ ನೆಲೆ ಯಾಯಿನ ಈ ಕ್ಷೇತ್ರದ ರಾಜನ್ ದೈವ ಮುಂಡಿತ್ತಾಯ ದೈವ ಮಾತೆರ್ನಲಾ ಸಿತ್ತೆಲಿಪ್ಪಾವೊಂದು ಪಾಂಗಲಾಯಿ ದ ಮಣ್ಣದ ಭಕ್ತರ್ನಾಕುಲೂ ಸೇರುದು ಪ್ರಾರ್ಥನೆ ಮಾಲ್ತೋನ್ನುವಾ...
ಈ ಕಾಲದ ಆದಿಡ್ದ್ ನಡೊತ್ತೊಂದ್ ಬತ್ತೊಂದಿತ್ತನ ನಿನ್ನ ತಂಬಿಲಾದಿ ನೇಮ ಸೇವೆಲು ಶಾಸ್ತ್ರ ಪ್ರಕಾರ ನಡತ್ತೋಂದು ಬತ್ತಿನಂಚಿನವು ಯೆಂಕ್ಲಗ್ ತೆರಿದೊ ತೆರಿಯಂದನೇ ಉಂತುದೇ ಪೋತಿತ್ತುಂಡ್. ಅಯಿನು ನಿಕುಲು ನಿಕ್ಲನ ಶಕ್ತಿ ಸಾಮರ್ಥ್ಯೊಡು ಗುಡಿ ಕಟ್ಟಾದ್ ಕರಿನ ರಡ್ಡು ವರ್ಸಡ್ ನಿಕ್ಲೆಗ್ ಬೋಡು ಬೋಡಾಯಿ ಲೆಕ್ಕ ನೇಮ ನೆರಿನ್ ನಡಪ್ಪಾವೊಂದುಲ್ಲಾರು.

ಯೆನ್ಕಲೆನ ಪೂರ್ವ ಹಿರಿಯಾಕುಲೆ ಕಾಲೋಡ್ದ್ ಈ ಪಾಂಗಲಾಯಿ ಮಣ್ಣುಡು ನೆಲೆ ಯಾಯಿನ ನಾಗಸುಬ್ರಾಯ ದೇವೆರೇ.... ಅಂಚನೇ ನೆಲೆ ಯಾಯಿನದೈವಲೇ...... ಈ ಕ್ಷೇತ್ರದ ರಾಜನ್ ದೈವವಾಯಿನ ಮುಂಡ್ಯತ್ತಾಯ ದೈವನೇ........ ದೇವಸ್ತಾನ ಇದ್ಯಾಂದಿ ಪೊರ್ತುಗು ದೇವರಾದು ಕಾಪುನ ಶಕ್ತಿ ಸ್ವರೂಪ ನಿಕ್ಲು .. ಪಂಡದ್ ಎಚ್ಹರಿಕೆ ನುಡಿ ಕೇಂಡೊನ್ತಾ. . ಜಾತ್ರೆಗೆ ಸಮನಾಯಿನ ನೇಮ ಮಲ್ಪಾವೊನವೇ... ಪಂಡಿನ ನುಡಿಗ್ ಸರಿಯಾದು ಊರು ಊರೇ ಸೇರುಲೆಕ್ಕ ಗೌಜಿ ಗಾಂಭೀರ್ಯಡು ಎಂಕಲೆನ ಕೈಟ್ ನಿಕ್ಲೆಗ್ ಬೋಡಯಿಲೆಕ್ಕ ಉತ್ಸವ ಮಲ್ಪಾವೊನ್ಲೇ. ಉಂದು ಯೆಂಕ್ಲೆನ ಸೇವೆ ಪಂಡುದು ಈ ಕ್ಷೇತ್ರಡು ದುಂಬು ಉಂತೊಂದಾ....

ನಿಕ್ಲು ನೆಲೆ ಯಾಯಿನ ಈ ಕ್ಷೇತ್ರದ ಭೂಮಿನು ಶುಧ್ಧ ರೂಪಡು ಕಾಪಾಡೊಂದು ಬರಿಯಾರ ಪತ್ತು ಸಮಸ್ತೆರ್ನ ಒಂಜಿ ಕಮಿಟಿ ಆವೊಡಾತುಂಡು. ಅಂಚನೇ ಇನಿಮುಟ್ಟ ನಡಪ್ಪಾಯಿನ ಸಮಿತಿನು ಬರ್ಕಾಸ್ತು ಮಲ್ತುದು ಪೊಸತಾದು ಸಮಿತಿಗು ಈ ದುಂಬುದ ಲೆಕ್ಕನೇ .... ಸಮರ್ಥರಾಯಿನ ಭಕ್ತರೆನು ತೋಯಿಪ್ಪಾದು ಕೊರೊಡು. ನಿನ್ನ ಎದುರು ಮಾಲ್ಪುನ ತೀರ್ಮಾನಡು ವಾ ವೊಂಜಿ ಬಿನ್ನಾಬಿಪ್ರಾಯ ಆವಾಡು ಮನ ಕ್ಲೇಶ ಬರಾಂದಿಲೆಕ್ಕ ಆವೊಡಾಯಿನ ಜಾಗೆ ದ ರೆಕಾರ್ಡ , ಸಭಾ ಮಂಟಪ, ಮಾರ್ಗ ವರ್ಷಾವಧಿ ತಂಬಿಲಾದಿ ನೇಮ ಶಾಸ್ತ್ರೊಕ್ತವಾದು ನಡಪ್ಪಾದು ಕೊರೋಡು ಪಂಡುದು ಪತ್ತು ಬಿರೆಲು ಕೈ ಜೋಡಣೆ ಮಾಲ್ತೋಂದು ತರೆ ಕಂತ ಪಾಡುದು ಪ್ರಾರ್ಥನೆ ಮಾಲ್ತೊಂದುಲ್ಲಾ.

ಇನಿ ಎಂಕ್ಲ ಪಂಡಿ ಪಾತೆರಡು ಆವಾಡು, ಸೇವೆ ಕೆಲಸಾಡವಡು ಒಪ್ಪ ತಪ್ಪು ಬತ್ತುದಿಪ್ಪು.ಬತ್ತುದುಲಾ ಪೋವು.. ಜೋಗೆ ಮಾನವೆರು ಎಂಕ್ಲ. ನಿಕ್ಲೋ....ಈ ಲೋಕ ದ ಮಹಾ ಶಕ್ತಿ ಸ್ವರೂಪ.. ರಾಜನ್ ದೈವನೇ ಈ ಪಾಂಗಲಾಯಿ ಮಣ್ಣದ ಋಣ ಇತ್ತುದು ಕೇಂಡೊಂದುಲ್ಲಾ... ಏಂಕಲು ಬಿತ್ತುನ ಬುಳೆಟ್ಟಾವಡು, ಮರತ್ತೊ ಫಲಟ್ಟಾವಡು, ನಾಲು ಕಾರುದ ನಡೆಟ್ಟಾವಡು, ಕೈ ಕಂಜಿಲೆಗಾವಡು ತತ್ವಾರ ಬರಂದಿಲೆಕ್ಕ ತೂವೊನ್ಲಾ.ನಂಬು ಬರ್ಪಿ ನಂಚಿತ್ತಿನ ಈ ಭಕ್ತ ಜನಕ್ಕುಲೆನ ಕುಟುಂಬೊಡು, ನೆರೆಕರೆತ್ತಾಗ್ಲು, ಗ್ರಾಮ ಗ್ರಾಮ ಗಾವೊಡು ನ್ಯಾಯ ಪಾತೆರ ಬರಂದಿಲಿಕ್ಕ ಧರ್ಮ ದೈವವಾದು ಉಂತುದು ಆರೋಗ್ಯ ಸುಖ ಸಂಪತ್ತು ಭಾಗ್ಯಾದಿ ಕೊರೊಡು .

ಅಂಚನೆ ಇನಿ ಆಪುನಂಚಿ ಸಮಿತಿದ ಮಾಂತ ಕೆಲಸ ನಿರ್ವಿಘ್ನವಾದು ನಡಪವೊಡು. ಪುತ್ತೂರು ಶ್ರೀ ಮಹಾಲಿಂಗೇಶ್ವರನ ದಿವ್ಯವಾಯಿನ ಸನ್ನಿಧಿಡು ಈ ಪಾಂಗಾಲಾಯಿ ಮಣ್ಣುಡು ಕಾರಣಿಕದ ಧರ್ಮ ದೈವಾಂದು ಪನ್ಪುಡಾಲ ದೈವನೆ.. ಸಮಸ್ತ ಗ್ರಾಮಸ್ತೆರೆನು ರಕ್ಷಣೆ ಮಾಲ್ಪೊಡು ಪಂಡುದು ಪ್ರಾರ್ಥನೆ. ಸ್ವಾ...ಮಿ.... ದೈವನೆ.....>


ಸಲಹೆ : ಶ್ರೀ . ಶಶಾಂಕ ನೆಲ್ಲಿತ್ತಾಯ.

ಕನ್ನಡ

Thursday, September 23, 2010

hallo , govindanna naanu manila mahadeva shastry

Thursday, January 7, 2010

ಬರೆಯಲು ಕುಳಿತೆ. ಓದುವವರಿಲ್ಲ. ಮೊದಲು ನನ್ನ ಲೇಖನ ಬರುತ್ತಿದೆ. ನಾನೂ ಈ ಲೋಕಕ್ಕೆ ನುಗ್ಗುತ್ತಿದ್ದೇನೆ. ಸ್ನೇಹಿತರು ಈ ಬ್ಲಾಗಿಗೆ ಸೇರಿಸುವುದು ಹೇಗೆ.

Sunday, January 3, 2010

ಹೇಗೆ ಪ್ರಾರಂಬಿಸುವುದು.