
ಇವರು ಯಾರು ಬಲ್ಲಿರೇನು?
ಹವ್ಯಕ ಸಮಾಜದಲ್ಲಿ ೧೬ ,೧೭ನೇ ಶತಮಾನದಲ್ಲಿ ಮಡೆಕೇರಿ ಅರಸರಿಂದ ಪುರಸ್ಕ್ರತರಾದ ಮೂಡಂಬೈಲು ಶಾಸ್ತ್ರಿ ಮನೆತನದವರು.
’ಮಣಿಲಾ ಶಾಸ್ತ್ರಿ ಸಹೋದರರು.
ನನಗೆ ತಿಳಿದಂತೆ ಆ ಒಂದು ಕಾಲದಲ್ಲಿ ಸುಮಾರಾಗಿ 1945 ರಲ್ಲಿ ಮನೆ ಯಜಮಾನ ಅಕಾಲ ವಿಧಿವಶರಾದಾಗ ಈ ಎಂಟೂ ಜನ ಸಹೋದರು ಸುಮಾರು ಹದಿನೈದು ವರ್ಷಗಳ ಕಾಲ ತಮ್ಮ ಕೊನೆಯ ತಮ್ಮನ ಮದುವೆ ಆಗುವವರೆಗೂ ಸಮಷ್ಟಿ ಕುಟುಂಬ ದ ಜೀವನ ವನ್ನು ಸಮಾಜಕ್ಕೆ ಆದರ್ಶವಾಗಿ ನಡೆಸಿದರು. ಜೆಲ್ಲೆಗೆ ಪ್ರಸಿದ್ದವಾದ " ಪರಿಯಾಲ್ತಡ್ಕ ಹೈಯರ್ ಪ್ರೈಮರಿ" ಶಾಲೆ ಯಲ್ಲಿ ಸಾಂಸ್ಕ್ರತಿಕ ವೈಭವದ ವಾರ್ಷಿಕ ಜಾತ್ರೆಯನ್ನೆ ನಡೆಸಿ ವಿದ್ಯಾಸಂಸ್ಥೆಗಳ ಸ್ಥಾಪನೆಯ ಕನಸು ಕಂಡ ಧೀಮಂತರಿವರು.
ಇಂದಿನ ವಿವೇಕಾನಂದ ಎಜುಕೇಶನ್ ಸೊಸೈಟಿ ನಡೆಸುತ್ತಿರುವ :ಪುಣಚಾ ಶ್ರೀದೇವಿ ಹೈಸ್ಕೂಲ್ ನ ಸ್ಥಾಪನೆಗೆ ಮೂಲ ಪ್ರೇರಕರು.
ಇವರ ಪರಿಚಯ ಮಾಡಿಸಲು ನಾನು ತುಂಬಾ ಹೆಮ್ಮೆ ಪಡುತ್ತೇನೆ.
ಹವ್ಯಕ ಸಮಾಜದಲ್ಲಿ ಇಂದೂ ಇವರ ಮುಂದಿನ ತಲೆಮಾರು ತನಗೆ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಗೌರವಾದರಗಳನ್ನು ಉಳಿಸಿ ಕೊಂಡಿದ್ದು ಉತ್ತಮ ಸ್ಥಾನಮಾನ ಹೊಂದಿದ್ದಾರೆ.
ಇವರ ವಿಶೇಷತೆಗಳನ್ನ ನೋಡಿರಿ.
ಈ ಎಂಟೂ ಸಹೋದರರಿಗೆ ಇಪ್ಪತ್ತಮೂರು ಜನ ಗಂಡು ಮಕ್ಕಳು ಹಾಗೂ ಇಪ್ಪತ್ತಮೂರು ಜನ ಹೆಣ್ಣು ಮಕ್ಕಳು.
ಎಲ್ಲರಿಗೂ ಮದುವೆ ಆಗಿದೆ. ತಕ್ಕ ಮಟ್ಟಿಗೆ ಚೆನ್ನಾಗಿದ್ದಾರೆ. .... ಮುಂದುವರಿಯುವುದು.

No comments:
Post a Comment